ಗಂಗಾವತಿ ಮಾರುಕಟ್ಟೆಯಲ್ಲಿ ಗರಂ ಸುದ್ದಿ: ಬಡವರ ಹೊಟ್ಟೆಗೆ ಕನ್ನ ಹಾಕುವ ‘ಅನ್ನ ಭಾಗ್ಯ’ ದಂಧೆಕೋರರ ಜಾಲ ಪತ್ತೆ! ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದಂಧೆಕೋರರು…

08/06/2026 1:45 PM Total Views: 119550

Gouse Dafedar

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಗಂಗಾವತಿ ಮಾರುಕಟ್ಟೆಯಲ್ಲಿ ಗರಂ ಸುದ್ದಿ: ಬಡವರ ಹೊಟ್ಟೆಗೆ ಕನ್ನ ಹಾಕುವ ‘ಅನ್ನ ಭಾಗ್ಯ’ ದಂಧೆಕೋರರ ಜಾಲ ಪತ್ತೆ! ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದಂಧೆಕೋರರು…

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗಂಗಾವತಿ: ಸರಕಾರ ಬಡವರ ಹಸಿವು ನೀಗಿಸಲು ನೀಡುವ ‘ಅನ್ನ ಭಾಗ್ಯ’ ಯೋಜನೆಯ ಉಚಿತ ಅಕ್ಕಿ, ಬಡವರ ತಟ್ಟೆ ಸೇರುವ ಮುನ್ನವೇ ಕಳ್ಳಸಂತೆಕೋರರ ಜೇಬು ತುಂಬಿಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಸಾರ್ವಜನಿಕರ ಜಾಗೃತಿಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ರೇಷನ್ ಅಕ್ಕಿ ಸಾಗಿಸುತ್ತಿದ್ದ ಬೃಹತ್ ಅಕ್ರಮ ಜಾಲವೊಂದು ಗಂಗಾವತಿ ಮರಳಿ ಟೋಲ್ ಗೇಟ್ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ!

**ಅಕ್ರಮ ದಂಧೆಯ ‘ಕಿಂಗ್‌ಪಿನ್‌’ಗಳು ಇವರೇ ನೋಡಿ!**
ಕುಡುತೀನಿ ಹಾಗೂ ಕಂಪ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಂದ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ಖರೀದಿಸುವುದು ಅಥವಾ ನ್ಯಾಯಬೆಲೆ ಅಂಗಡಿಗಳಿಂದ ನೇರವಾಗಿ ಕದ್ದು ಸಂಗ್ರಹಿಸುವುದೇ ಇವರ ಮುಖ್ಯ ಕಸುಬು. ಈ ಅಕ್ರಮ ದಂಧೆಯ ಹಿಂದೆ ಜಿನುರ್ ಬಸಪ್ಪ ಕುಡುತೀನಿಯ ಗಫೂರ್ ತಂದೆ ದಸ್ತಗಿರಿ. ನಾಸೀರ್ ತಂದೆ ದಸ್ತಗಿರಿ  ಹಾಗೂ ಸ್ವತಃ  ದಸ್ತಗಿರಿ  ಎಂಬ ವ್ಯವಸ್ಥಿತ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದೆ. ಬಡವರ ಹೊಟ್ಟೆ ಹೊಡೆದು ಕೋಟಿ ಕೋಟಿ ಸಂಪಾದಿಸುವುದೇ ಇವರ ನಿತ್ಯದ ಕಾಯಕ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಗಂಗಾವತಿ ಮಾರ್ಗವಾಗಿ ಮಾನ್ವಿಗೆ ಸಾಗಾಣೆ!
ಕುಡುತೀನಿ ಮತ್ತು ಕಂಪ್ಲಿ ಭಾಗದಿಂದ ಕಳ್ಳತನದಿಂದ ಸಂಗ್ರಹಿಸಿದ ಈ ಅನ್ನ ಭಾಗ್ಯದ ಅಕ್ಕಿಯನ್ನು ಮಾನ್ವಿಯ ಪ್ರಭಾವಿ ಅಕ್ಕಿ ಗಿರಣಿ ಮಾಲೀಕ  ಹಾಲ್ಡಾಲ್ ವೀರಭದ್ರಪ್ಪ ಎಂಬಾತನಿಗೆ ತಲುಪಿಸಲು ಸ್ಕೆಚ್ ಹಾಕಲಾಗಿತ್ತು. ಕುಡುತೀನಿ ಕಡೆಯಿಂದ ಗಂಗಾವತಿ ಮಾರ್ಗವಾಗಿ ಮಾನ್ವಿಯತ್ತ ರಾಜಾರೋಷವಾಗಿ ಸಾಗುತ್ತಿದ್ದ ಅಕ್ಕಿ ಲಾರಿಯ ರಹಸ್ಯ ಮಾಹಿತಿ ಕೊನೆಗೂ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ.

Advertisement Image

ಸಾಮಾಜಿಕ ಹೋರಾಟಗಾರ ಮಚ್ಚಿ ಗಣೇಶ ಈ ಕುರಿತು ನಮ್ಮ ಪಬ್ಲಿಕ್ ಪವರ್ ನ್ಯೂಸ್ ಚಾನಲ್ ಗೆ ಮಾಹಿತಿ ನೀಡಿದ್ದು ಸಾರ್ವಜನಿಕರ ಜಾಗೃತಿ – 112 ಗೆ ಕರೆ ಮಾಡಿ ತಿಳಿಸಿಲಾಗಿದೆ ಎಂದು ತಿಳಿಸಿದರು

ದಂಧೆಕೋರರು ಎಷ್ಟೇ ಚಾಲಾಕಿಯಾಗಿದ್ದರೂ, ಜಾಗೃತ ಸಾರ್ವಜನಿಕರು ಇವರ ಕಳ್ಳಾಟವನ್ನು ಬಯಲಿಗೆಳೆದಿದ್ದಾರೆ. ಗಂಗಾವತಿಯ **ಮರಳಿ ಟೋಲ್ ಗೇಟ್** ಹತ್ತಿರ ಅಕ್ಕಿ ಸಾಗಾಟದ ಅಕ್ರಮದ ವಾಸನೆ ಬಡಿಯುತ್ತಿದ್ದಂತೆ ಸಾರ್ವಜನಿಕರು ತಕ್ಷಣವೇ ಜಾಗೃತರಾಗಿ **112 ತುರ್ತು ಪೊಲೀಸ್ ಸಹಾಯವಾಣಿಗೆ** ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗಂಗಾವತಿ ಗ್ರಾಮೀಣ/ನಗರ ಠಾಣೆಯ ಪೊಲೀಸರು ಸದ್ಯ ಅಕ್ಕಿ ಮತ್ತು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

oplus_8388640

**ಖಾಕಿ ಪಡೆಗೆ ಮತ್ತು ಆಹಾರ ಇಲಾಖೆಗೆ ಸಾರ್ವಜನಿಕರ ನೇರ ಪ್ರಶ್ನೆ: ಪ್ರಕರಣ ದಾಖಲಾಗುತ್ತೋ? ಅಥವಾ ಪ್ರಭಾವಿಗಳಿಗೆ ಮಣಿಯುತ್ತೀರೋ?**
ಈಗ ಇಡೀ ತಾಲೂಕಿನ ಕಣ್ಣು ಗಂಗಾವತಿ ಪೊಲೀಸರ ಮೇಲಿದೆ. ಈ ದಂಧೆಯ ಹಿಂದೆ ಮಾನ್ವಿಯ ಹಾಲ್ಡಾಲ್ ವೀರಭದ್ರಪ್ಪನಂತಹ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದರಿಂದ, ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸುತ್ತಾರಾ? ಅಥವಾ ರಾಜಕೀಯ ಮತ್ತು ಹಣದ ಪ್ರಭಾವಕ್ಕೆ ಮಣಿದು  ಬಿಟ್ಟು ಕಳುಹಿಸುತ್ತಾರಾ? ಎಂಬ ಸಂಶಯ ಸಾರ್ವಜನಿಕರಲ್ಲಿ ದಟ್ಟವಾಗಿ ಮೂಡಿದೆ.
ಬಡವರ ಅನ್ನವನ್ನು ಕದ್ದು ಕೋಟ್ಯಧಿಪತಿಗಳಾಗುವ ಇಂತಹ ಸಮಾಜಘಾತಕ ಕೀಟಗಳಿಗೆ ಕಾನೂನಿನ ಸರಿಯಾದ ಪಾಠ ಕಲಿಸಲೇಬೇಕಿದೆ. ಗಂಗಾವತಿ ಪೊಲೀಸರು ಯಾವುದೇ ಪ್ರಭಾವಕ್ಕೂ ಬಗ್ಗದೆ, ಈ ಜಿನುರ್ ಬಸಪ್ಪ, ಗಫೂರ್, ನಾಸೀರ್, ದಸ್ತಗಿರಿ ಮತ್ತು ಅಕ್ಕಿ ಖರೀದಿದಾರ ಹಾಲ್ಡಾಲ್ ವೀರಭದ್ರಪ್ಪನ ವಿರುದ್ಧ ಕಠಿಣ ಇಸಿ ಕಾಯ್ದೆ (Essential Commodities Act) ಅಡಿಯಲ್ಲಿ ಪ್ರಕರಣ ದಾಖಲಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ!

 

WhatsApp Icon
Subscribe My YouTube