“ಶಿಸ್ತು ಮಕ್ಕಳಿಗೆ ಮಾತ್ರವೇ? ಶಿಕ್ಷಕರಿಗಿಲ್ಲವೇ? ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲರ ದರ್ಪದ ವಿರುದ್ಧ ಪಾಲಕರ ಆಕ್ರೋಶ! ಈ ಕೂಡಲೇ ಶಿಕ್ಷಣ ಇಲಾಖೆ ಗಮನಹರಿಸಲಿ.”

02/02/2026 10:45 AM Total Views: 95098

Gouse Dafedar

 

 

ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಬೆಳ್ಳಂಬೆಳಗ್ಗೆ ಚೈತನ್ಯದ ಚೌಕಟ್ಟಿನಲ್ಲಿ ಹೈಡ್ರಾಮಾ: ಶಿಸ್ತಿನ ಹೆಸರಲ್ಲಿ ಪ್ರಾಂಶುಪಾಲರ ‘ಪವರ್ ಆಟ’!

ಬೆಂಗಳೂರಿನ ಯಾವುದೋ ಒಂದು ಮೂಲೆಯಲ್ಲಲ್ಲ, ನಮ್ಮ ನಿಮ್ಮ ಕಣ್ಣೆದುರೇ ಇರುವ ಗಂಗಾವತಿಯ ‘ಶ್ರೀ ಚೈತನ್ಯ ಟೆಕ್ನೋ ಶಾಲೆ’ಯ ಗೇಟಿನ ಮುಂದೆ ಇಂದು ಬೆಳಗ್ಗೆ ಹವಾಮಾನಕ್ಕಿಂತ ಹೆಚ್ಚಾಗಿ ಪಾಲಕರ ರಕ್ತ ಕುದಿಯುತ್ತಿತ್ತು. ವಿಷಯ ಸಿಂಪಲ್, ಆದರೆ ಅಲ್ಲಿ ನಡೆದ ಘಟನೆಗಳು ಮಾತ್ರ ಅಕ್ಷರಶಃ ಸಿನಿಮಾ ಸ್ಟೈಲ್‌ನಲ್ಲಿದ್ದವು.

Read Our Photo Story
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ವಾಟ್ಸಾಪ್ ಗ್ರೂಪ್ ನ್ನು ಸೇರಿರಿ

ಗೇಟಿನ ಹೊರಗೆ ನಿಂತ ‘ಬಾಲ’ನ್ಯಾಯ!

ಗಡಿಯಾರ ಎಂಟೂವರೆ ದಾಟಿತೋ ಇಲ್ಲವೋ, ಸೆಕೆಂಡು ಮುಳ್ಳಿನ ಲೆಕ್ಕಾಚಾರದಲ್ಲಿ ಸ್ವಲ್ಪ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಶಾಲೆಯ ಸಿಬ್ಬಂದಿ ಗೇಟಿನ ಹೊರಗೇ ತಡೆದು ನಿಲ್ಲಿಸಿದ್ದರು. ಒಳಗಡೆ ಪ್ರಾಂಶುಪಾಲರ ಶಿಸ್ತಿನ ದರ್ಬಾರು. ಹೊರಗಡೆ ಬೇಯುತ್ತಿರುವ ಹತ್ತಾರು ಎಳೆಗರುಗಳು. ಇದನ್ನು ಕಂಡ ಪಾಲಕರು ಸುಮ್ಮನಿರುತ್ತಾರೆಯೇ? ‘ಮಕ್ಕಳನ್ನು ಯಾಕೆ ಹೊರಗೆ ನಿಲ್ಲಿಸಿದ್ದೀರಿ? ಬನ್ನಿ, ಇಲ್ಲಿ ಬಂದು ಉತ್ತರ ಕೊಡಿ’ ಎಂದು ಪ್ರಾಂಶುಪಾಲರಿಗೆ ಬುಲಾವ್ ನೀಡಿದರು.

Advertisement Image

( ಸಾಂದರ್ಭಿಕ ಚಿತ್ರ )

ಪ್ರಾಂಶುಪಾಲರ ‘ಕ್ಯಾಬಿನ್’ ಅಹಂಕಾರ

​ಜನಸಾಮಾನ್ಯರ ಧ್ವನಿಗೆ ಬೆಲೆ ಕೊಡದ ಆ ಪ್ರಾಂಶುಪಾಲರು ಮಾತ್ರ ಕ್ಯಾಬಿನಿನ ಎಸಿ ಗಾಳಿಯಲ್ಲಿ ಕುಳಿತು, “ಶಿಸ್ತು ಕಲಿಸುವುದು ಬೇಡ ಅಂದವರು ನನ್ನ ಚೇಂಬರ್‌ಗೆ ಬಂದು ಮಾತಾಡಿ” ಎಂದು ಒಣ ಗತ್ತು ಪ್ರದರ್ಶಿಸಿದರು. ಪಾಲಕರ ಕೆಂಡದಂತಹ ಮಾತಿಗೆ ಕ್ಯಾರೆ ಎನ್ನದೆ ಗತ್ತಿನಿಂದ ಹೆಜ್ಜೆ ಹಾಕಿದ ಪ್ರಾಂಶುಪಾಲರ ವರ್ತನೆ ಅಲ್ಲಿನ ವಾತಾವರಣವನ್ನು ಮತ್ತಷ್ಟು ಕಾವೇರಿಸಿತು.

ಪಾಲಕರ ಹರಿತವಾದ ಪ್ರಶ್ನೆಗಳು

​ಸಿಟ್ಟಾದ ಪಾಲಕರು ಪ್ರಾಂಶುಪಾಲರ ಮುಖಕ್ಕೆ ಹೊಡೆದಂತೆ ಕೇಳಿದ ಪ್ರಶ್ನೆಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕನ್ನಡಿಯಂತಿದ್ದವು:

  • “ಶಿಸ್ತು ಅಂದರೆ ಬರೀ ವಿದ್ಯಾರ್ಥಿಗಳಿಗೆ ಮಾತ್ರವೇ? ನಿಮ್ಮ ಶಾಲೆಯ ವಾಹನಗಳು ಲೇಟಾಗಿ ಬಂದಾಗ ಯಾರು ಗೇಟಿನ ಹೊರಗೆ ನಿಲ್ಲುತ್ತಾರೆ?”
  • “ಶಿಕ್ಷಕರು ತಡವಾಗಿ ಬಂದರೆ ಅವರಿಗೂ ಇದೇ ನಿಯಮ ಅನ್ವಯಿಸುತ್ತದೆಯೇ? ಅಥವಾ ನಿಯಮಗಳು ಬರೀ ಫೀಸ್ ಕಟ್ಟುವ ಪಾಲಕರಿಗೆ ಮಾತ್ರನಾ?”

​ಅಷ್ಟೇ ಅಲ್ಲ, ಶಾಲೆಯ ಒಳಗಿನ ಅಸಲಿಯತ್ತನ್ನು ಬಿಚ್ಚಿಟ್ಟ ಪಾಲಕರು, “ಈ ಶಾಲೆಯಲ್ಲಿ ಸರಿಯಾದ ಶಿಕ್ಷಣ ಕ್ರಮವೇ ಇಲ್ಲ (Code-A), ಪಠ್ಯಕ್ರಮಕ್ಕೆ ತಕ್ಕಂತೆ ಪಾಠ ಮಾಡುವ ಶಿಕ್ಷಕರಿಲ್ಲ” ಎಂದು ನೇರವಾಗಿಯೇ ಕಿಡಿಕಾರಿದರು.

ರವಿ ಬೆಳೆಗೆರೆ ಮಾತು: ಶಿಕ್ಷಣ ಸಂಸ್ಥೆಗಳು ಸಂಸ್ಕಾರದ ದೇವಸ್ಥಾನಗಳಾಗಬೇಕೇ ಹೊರತು, ಕೇವಲ ಶಿಸ್ತಿನ ಹೆಸರಿನಲ್ಲಿ ಸರ್ವಾಧಿಕಾರ ನಡೆಸುವ ಜೈಲುಗಳಾಗಬಾರದು. ಮಗುವಿನ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತವರು ಮೊದಲು ತಮಗೆ ತಾವೇ ಶಿಸ್ತು ಕಲಿತುಕೊಳ್ಳುವುದು ಒಳಿತು!

WhatsApp Icon
Subscribe My YouTube